ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ ೯ ಥಾಟ್ ಸಿನಿಮಾಸ್ ಲಾಂಛನದಲ್ಲಿ ತರುಣ್ ಶಿವಪ್ಪ ನಿರ್ಮಾಣದ ರೋಜ್ ಚಿತ್ರಕ್ಕೆ ಗುಟ್ಟಳ್ಳಿ ಸರ್ಕಲ್ಲಿನಲ್ಲಿ ನಾಯಕ ನಾಯಕಿಯೊಂದಿಗೆ ಬುಲೆಟ್ ಪ್ರಕಾಶ್, ನಿರ್ದೇಶಕ ವಿಕ್ಟರಿ ವಾಸು ಹಾಗೂ ೪೦೦ ಜನ ಸಹಕಲಾವಿದರುಗಳು ಸೇರಿ ಸರ್ಕಲ್ಲಿನಲ್ಲಿ ಗಣೇಶನನ್ನು ಕೂರಿಸ್ಬೇಕು ಅಂತ ಹೇಳಿ ನಡೆಯುವ ರಾದ್ಧಾಂತಗಳು ಹಾಸ್ಯ ಸನ್ನಿವೇಶಗಳ ಚಿತ್ರೀಕರಣ ಕಳೆದ ೪ ದಿನಗಳ ಕಾಲ ನಡೆಯಿತು. ಈ ಚಿತ್ರದ ರಚನೆ -ನಿರ್ದೇಶನ ಸಹನ ಹೆಚ್.ಎಸ್. ಛಾಯಾಗ್ರಹಣ - ಗುರುಪ್ರಶಾಂತ್ ರೈ, ಸಂಗೀತ-ಅನೂಪ್ ಸೀಳಿನ್, ಸಂಕಲನ-ಕೆ.ಎಂ.ಪ್ರಕಾಶ್, ನೃತ್ಯ - ಎ.ಹರ್ಷ-ಕಲೈ, ಸಾಹಸ-ಮಾಸ್ ಮಾದ, ಸಹನಿರ್ದೇಶನ - ಕೆ.ವಿಜಯ್ ಭದ್ರಾವತಿ, ನವೀನ್ ರೆಡ್ಡಿ, ರಿಷಿ ರಾಮಯ್ಯ, ನಿರ್ವಹಣೆ - ಸುಧೀಂದ್ರ ಹೊಸಳ್ಳಿ, ತಾರಾಗಣದಲ್ಲಿ - ಅಜಯ್ ರಾವ್, ಶ್ರಾವ್ಯ, ಚಂದ್ರಶೇಖರ್ (ಎಡಕಲ್ಲುಗುಡ್ಡದ ಮೇಲೆ), ಚಿ.ಗುರುದತ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ವಿಕ್ಟರಿ ವಾಸು, ಉಮೇಶ್ ಪುಂಗ, ವೆಂಕಟೇಶ್ ಪ್ರಸಾದ್, ಸುಧೀರ್, ರೋಹನ್ ಗೌಡ, ಮುಂತಾದವರಿದ್ದಾರೆ.